Wednesday, October 20, 2010

ನೀನೆ ಕಾರಣ............|

 
 
 
 
 
 
 
 
 
 
 
 
 
ಮನಸು ಬರುಡಾದ ಜನರ ಮರೆತು
ಬಾ ಹೊಸ ಕನಸು ಕಾಣುವ 
ಕಣ್ಣು ಕುರುಡಾದ ಜಗವ ಮರೆತು
ಕಣ್ಣು ಮುಚ್ಚಿ ನಡೆಯುವ 
    ಅರಳಿದೆ ಬಾಡಿಹೋದ ನನ್ನೆದೆ 
    ಅದಕೆ ನೀನೆ ಕಾರಣ............|
 
ಓದಬೇಡ ಯಾವ ಪತ್ರಿಕೆಯ 
ಕೊಲೆ, ಸುಲಿಗೆ, ಮೋಸ, ವಂಚನೆ 
ಬರೀ ರಾಜಕಾರಣ,
ಓದು ಬಾ ನನ್ನೆದೆಯ 
ಬರೆದಿರುವೆ ನವಿರಾದ ಕವನವ 
ಅದಕೆ ನೀನೆ ಕಾರಣ............||
 
ಹಾಡಬೇಡ ಈ ಲೋಕದಲಿ
ಇಲ್ಲಿ ಯಾರು ಕೇಳರು
ಮನದಿ ಬರೀ ಹಗೆಯ ತೋರಣ,
ಹಾಡು ಬಾ ನನ್ನೆದೆಯಲಿ
ವಿಶಾಲವಾಗಿ ಅರಡಿಹುದು
ಅದಕೆ ನೀನೆ ಕಾರಣ............||
                                          -ಅರಶಿ

No comments:

Post a Comment